ಹಿರಿಯೂರು ಪಟ್ಟಣದ ಸಂಜೀವಿನಿ ಆಸ್ಪತ್ರೆಯ ಹೆಸರಾಂತ ವೈದ್ಯರುಗಳಾದ ಸ್ತ್ರೀ ತಜ್ಞೆ ಡಾ.ಲತಾ & ಮಕ್ಕಳ ತಜ್ಞ ಡಾ.ರಾಮಚಂದ್ರಪ್ಪರವರು ತಮ್ಮ ಮಗಳು ಕುಮಾರಿ ಡಾ.ಪ್ರಾರ್ಥನಾ ರವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಶುಭೋದಯ ವೃದ್ಧಾಶ್ರಮದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಂಡು ಆಶ್ರಮದ ಎಲ್ಲಾ ವೃದ್ಧರಿಗೂ ಬಿ.ಪಿ, ಶುಗರ್ ಪರೀಕ್ಷೆಯೊಂದಿಗೆ ಆರೋಗ್ಯ ತಪಾಸಣೆ ಮಾಡಿ, ಔಷಧಿ ಮಾತ್ರೆಗಳನ್ನೂ ಉಚಿತವಾಗಿ ಕೊಟ್ಟು, ಜೊತೆಗೆ ತಾವೇ ಬೆಳಗಿನ ಉಪಹಾರವನ್ನೂ ತಂದು ಎಲ್ಲರಿಗೂ ಬಡಿಸಿ ತಮ್ಮ ಸಂತೋಷ ವ್ಯಕ್ತಪಡಿಸಿದರು. ಶ್ರೀಯುತರ ಕುಟುಂಬಕ್ಕೆ ಆ ದಯಾಮಯ ಭಗವಂತನ ಕೃಪೆ ಸದಾ ಇರಲೆಂದು ಪ್ರಾರ್ಥಿಸುತ್ತಾ ಆಶ್ರಮದ ಪರವಾಗಿ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ಸಮರ್ಪಿಸುತ್ತೇವೆ
