ಇಂದು ಶಿರಾ ತಾಲ್ಲೂಕು ಚಿಕ್ಕತಿಮ್ಮನಹಳ್ಳಿಯ ಕರಿಯಮ್ಮ ದೇವಿ ದೇವಾಲಯದ ಬಳಿ ನೂತನ ಯಾತ್ರಿ ನಿವಾಸ ಕಟ್ಟಡ ಭೂಮಿ ಪೂಜೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾಯ೯ಕ್ರಮದ ದಿವ್ಯ ಸಾನಿಧ್ಯವಹಿಸಿ ನೂತನ ವಧುವರರಿಗೆ ಅಶಿವ೯ದಿಸಿದ ಮಹಾಯೋಗಿ ಪರಮಪೂಜ್ಯ ಶ್ರಿ ಶ್ರಿ ಶ್ರಿ ಡಾ.ನಂಜಾವಧೂತ ಮಹಾ ಸ್ವಾಮಿಜಿಗಳು
ಕುಂಚಿಟಿಗರ ಒ ಬಿ ಸಿ ಕನಸಿಗೆ ಇದೆ ವೇಳೆ ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲಿಕರಣ ಮಂತ್ರಿಗಳಾದ ಶ್ರಿ ಎ.ನಾರಾಯಣಸ್ವಾಮಿಯವರಿಗೆ ಶ್ರಿಗಳು ಆಗ್ರಹ ಪೂವ೯ಕ ವಿಷಯ ಮಂಡನೆ ಮಾಡಿದರು.
ಇದಕ್ಕೆ ಪೂರಕವಾಗಿ ಮಾನ್ಯ ರಾಜ್ಯ ರೇಷ್ಮೆ ನಿಗಮ ಮಂಡಲಿ ಅಧ್ಯಕ್ಷರಾದ ಶ್ರಿ ಎಸ್ ಆರ್ ಗೌಡರವರು ಹಾಗೂ ಶಾಸಕರಾದ ಡಾ.ಸಿ.ಎಂ ರಾಜೇಶಗೌಡರವರು ಧ್ವನಿಗೂಡಿಸುವ ಮೂಲಕ ಸಾಕ್ಷಿಯಾದರೂ.
ಹಿನ್ನಲೆ :
ಮಾನ್ಯ ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರ ಕಾಲದಲ್ಲಿ ಸಿದ್ದಗೊಂಡಿದ್ದ ಕುಂಚಿಟಿಗರ ಕುಲಶಾಸ್ತ್ರ ಅಧ್ಯಯನ ವರದಿ ಮಾನ್ಯ ಕುಮಾರಸ್ವಾಮಿಯವರ ಕಾಲದಲ್ಲಿ ಅನುಮೋದನೆ ಗೊಂಡು ಕೇಂದ್ರ ಓ ಬಿ ಸಿ ಗೆ ಸೇರಿಸಲು ಶಿಫಾರಸ್ಸು ಕೇಂದ್ರ ಅಂಗಳ ಸೇರಿತ್ತು.
ಮುಂದುವರೆದ ಬಾಗವಾಗಿ ನಮ್ಮ ಪುಣ್ಯವೆಂಬಂತೆ ಸಂಬಂದಿಸಿದ ಮಂತ್ರಿಗಳೆ ನಮ್ಮ ಸಂಸದರಾಗಿದ್ದಾರೆ ಹಾಗೂ ಬಹು ಸಂಖ್ಯಾತ ಮತದಾರರು ಸಂಸದರ ಕ್ಷೇತ್ರದಲ್ಲಿ ಬರುವುದು ಮಾನ್ಯ ಸಂಸದರ ಜವಬ್ದಾರಿ ಮತ್ತಷ್ಥು ಹೆಚ್ಚಿಸಿದೆ ಮತ್ತು ಇಂತಹ ಸುಸಮಯ ಒದಿಗಿಬರುವುದು ಕಷ್ಥ
ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂಬಂತೆ ಶ್ರಿಗಳು ಇಂದು ಕೇಂದ್ರ ಅನುಮೋದನೆಗೆ ಶ್ರಿಗಳ ಆಗ್ರಹದಿಂದ ನೆನೆಗುದಿಗೆ ಬಿದ್ದಿದ್ದ ಕಡತಕ್ಕೆ ಶುಭಾರಂಭವಾಗಿದೆ ಎಂದರೆ ತಪ್ಪಾಗಲಾರದು.
ಶ್ರಿಗಳ ಅಗ್ರಹಕ್ಕೆ ಪೂರಕವಾಗಿ ಸ್ಪಂದಿಸಿ ತಾನೆ ಇದರ ವಯಕ್ತಿವಾಗಿ ಆಸಕ್ತಿವಹಿಸಿ ಅಗತ್ಯ ಕ್ರಮ ಜರುಗಿಸಲು ಶ್ರಮವಹಿಸುವುದಾಗಿ ತಿಳಿಸಿದ್ದು ಅತ್ಯಂತ ಸಂತಸದ ವಿಷಯವಾಗಿದೆ
We are a gaggle of volunteers and starting a new scheme in our community. Your web site offered us with valuable info to work on. You’ve done an impressive activity and our whole community will likely be grateful to you.